Tuesday, November 1, 2016

ಕನ್ನಡತನ ಮರೆಯುತ್ತಿರುವರೇ.... ಕನ್ನಡಿಗರು......?


ಪಕ್ಕದ ರಾಜ್ಯಗಳಾದ ತೆಲುಗು. ತಮಿಳು. ಭಾಷಿಕರಲ್ಲಿ ಇರುವ ಪ್ರಾದೇಶಿಕ ಭಾವನೆ ನಮ್ಮ ಕನ್ನಡಿಗರಲ್ಲಿ ಇಲ್ಲವಾಗಿದೆ, ಕನ್ನಡವೆಂದರೆ ಏನೊ ? ಎಂದು ತಿಳಿದ್ದಾರೆ ಆಂಗ್ಲ ಭಾಷೆಯಲ್ಲಿ ಇರುವ ವ್ಯಾಮೋಹ ಕನ್ನಡ ಮೇಲೆ ಇಲ್ಲವಾಗಿದೆ ಬೇರೆಯವರಿಗೆ ಮಾಹಿತಿ ಕೊಡಲು ಬೇರೆ ಬಾಷೆ ಬೇಕಾದರು ಕಲಿಯಲು ಸಿದ್ದ ಆದರೆ ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಲು ಹಿಂಜರಿಯುತ್ತಾರೆ. ತಮಿಳು ನಾಡು ಸರ್ಕಾರ ಅಂಗನವಾಡಿಯಿಂದ ಸ್ನಾತಕೋತ್ತರ ಪದವಿಯವರೆಗೂ ತಮಿಳಿನಲ್ಲೇ ಶಿಕ್ಷಣ ಪದ್ದತಿ ಜಾರಿಯಲ್ಲಿದೆ. ಆದರೆ ನಮ್ಮ ಸರ್ಕಾರ ಕನ್ನಡ ಶಾಲೆಗಳನ್ನು ಉಳಿಸಲು ಸಿದ್ದವಿಲ್ಲ. ಹಾಲೀ ಇರುವ ಕನ್ನಡ ಶಾಲೆಗಳ ಸ್ಥಿತಿ ಕೂಡ ಅಧೋಗತಿ, ಯಾವಾಗ ತಮ್ಮ  ಮೇಲಿನ ಸೂರು ತಲೆ ಮೇಲೆ ಬೀಳುತ್ತೋ ಅಂತ  ನಮ್ಮ ಬಡ ವಿದ್ಯಾರ್ಥಿಗಳು ಉಸಿರುಬಿಗಿ ಹಿಡಿದುಕೊಂಡು ಸರ್ಕಾರಿ ಕನ್ನಡ ಶಾಲೆಗಳ ತರಗತಿಗಳಲ್ಲಿ ಕೂಡುವಂತಾಗಿದೆ ! 

ಸರ್ಕಾರ/ಅಧಿಕಾರದಲ್ಲಿರುವ ಎಲ್ಲರೂ ಅವರವರ ಸ್ವಾರ್ಥಕ್ಕೆ ಕನ್ನಡ-ನಾಡು-ನುಡಿ-ಜಲ-ಸಂಸ್ಕೃತಿ, ಅಭಿವೃದ್ದಿಯ ಹೆಸರಿನಲ್ಲಿ ಕನ್ನಡಿಗರನ್ನು ಲೂಟಿ ಹೊಡೆಯುತ್ತಿದ್ದಾರೆ !  ಯಾರಿಗೂ ಕನ್ನಡ ಉಳಿಸುವ ಉದ್ದೇಶವಿಲ್ಲ ತೋರಿಕೆಗೆ ಮಾತ್ರ ಕನ್ನಡ ಕನ್ನಡ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೂ ನಾವೆಲ್ಲ ಸುಮ್ಮನಿದ್ದೇವೆ !

ಇನ್ನು ಕನ್ನಡಿಗರಾದ ನಮ್ಮ ನಿಮ್ಮ ನಡುವೆಯೇ ತಮ್ಮ ಸ್ವಾರ್ಥ ಸಾಧನೆಗೆ ಮೋಸ, ನಯ-ವಂಚನೆ, ಅನ್ಯಾಯ ಮಾಡಿಕೊಂಡು ಸಮಾಜದಲ್ಲಿ ತಾವೇ ಸಾಚಾ ವ್ಯಕ್ತಿಗಳಂತೆ ವರ್ತಿಸುತ್ತಾ ಮೆರೆಯುತ್ತಿರುವ ಕೆಲವು ಕನ್ನಡಿಗರು ನಮ್ಮ ಸಮಾಜದ ಸ್ವಾಸ್ಥ್ಯ ವನ್ನು ಹಾಳು ಮಾಡುತ್ತಿದ್ದಾರೆ.  ನಿಜವಾದ ಕನ್ನಡತನ ಇವರಲ್ಲಿಲ್ಲ ! ನಿಜವಾದ ಕನ್ನಡಿಗರೆಂದರೆ ವಿಶಾಲ ಹೃದಯವಂತರು, ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮಾನವೀಯತೆಯುಳ್ಳವರು, ಎಲ್ಲರನ್ನೂ ಒಳ್ಳೆಯವರೆಂದು ನಂಬುವ ಮುಗ್ಧ-ಮಾನವರು, 
ಇದನ್ನೇ ಬಲಹೀನತೆ ಎಂದು ಕೊಂಡು ನಿಜವಾದ ಕನ್ನಡಿಗರನ್ನು ಕೆಲವು ಸ್ವಾರ್ಥಿಗಳು ಅನ್ನ್ಯ ಭಾಷಿಕರೊಂದಿಗೆ ಕೂಡಿಕೊಂಡು ವಂಚಿಸುತ್ತಿದ್ದರೆ ಸಹಿಸಿಕೊಂಡು ಸುಮ್ಮನಿರುವುದು  ನಿಜವಾದ ಕನ್ನಡಿಗನ ಲಕ್ಷಣವಲ್ಲ !!
ಮೊದಲು ನಮ್ಮ ನಿಮ್ಮ ನಡುವೆ ಗೋಮುಖ ವ್ಯಾಘ್ರದಂತಿರುವ  ಹೀನ-ಚಾರಿತ್ರ್ಯವುಳ್ಳ ವ್ಯಕ್ತಿಗಳನ್ನು ಸದೆ ಬಡಿಯಲು ಕಂಕಣಬದ್ದರಾಗಿ ಹೋರಾಡೋಣ ! ಆಗಲೇ ಸುಭದ್ರ ಕರ್ನಾಟಕದ ಕನಸು ನನಸಾಗಲು ಸಾಧ್ಯ !

ಕನ್ನಡ ಭಾಷೆ ಉಳಿಸೋಣ. ಕನ್ನಡ ನಾಡು. ನುಡಿ. ಜಲ, ಸಂಸ್ಕೃತಿ,  
ನಿಜವಾದ ಕನ್ನಡ ಪ್ರೇಮಿಗಳನ್ನು ರಕ್ಷಿಸಲು ಹೋರಾಡೋಣ !!
ನಿಜವಾದ ಕನ್ನಡಪ್ರೇಮವನ್ನು ಜಗತ್ತಿಗೆ ತೋರಿಸೋಣ ! 
ಎಲ್ಲರಿಗೂ ೨೦೧೬ರ ಕನ್ನಡ  ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು !

No comments:

Post a Comment

Vishwa Manava Concept by Kuvempu

Search this blog